20 Jun 2015

19-06-2015
ವಾಚನಾವಾರ ಮತ್ತು ಭಾಷಾ ಕ್ಲಬ್ ಗಳ ಉದ್ಘಾಟನೆ

ಸೂರಂಬೈಲು, ಪಿ.ಎನ್.ಪಣಿಕ್ಕರ್ ಇವರ ಚರಮ ದಿನವಾದ ಇಂದು ಅವರ ಸಂಸ್ಮರಣಾರ್ಥವಾಗಿ ವಾಚನಾವಾರದ ಉದ್ಘಾಟನೆ ನಡೆಯಿತು.ಇದರೊಂದಿಗೆ ವಿವಿಧ ಭಾಷಾ ಕ್ಲಬ್ ಗಳನ್ನೂ ಉದ್ಘಾಟಿಸಲಾಯಿತು.ಉಧ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ವಹಿಸಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಕೆ.ವಿ.ಸತ್ಯನಾರಾಯಣ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮನೋಜ್ ವಿ. ವಾಚನಾ ದಿನದ ಸಂದೇಶವನ್ನು ಹೇಳಿದರು. ಎಸ್.ಆರ್.ಜಿ. ಕನ್ವೀನರ್ ಸುಬ್ರಹ್ಮಣ್ಯ ಭಟ್, ಸ್ಟಾಫ್ ಸೆಕ್ರಟರಿ ಶಶಿಕಲಾ ಎಚ್. ಇಂಗ್ಲೀಷ್ ಕ್ಲಬ್ಬ್  ಅಧ್ಯಕ್ಷರಾದ ಲೀನಾ ಕೆ, ಹಿಂದಿ ಕ್ಲಬ್ಬ್ ಅಧ್ಯಕ್ಷರಾದ  ಲಲಿತಾ ಟೀಚರ್, ಅರೇಬಿಕ್ ಕ್ಲಬ್ಬ್ ಅಧ್ಯಕ್ಷರಾದ ಇಸ್ಮಾಯಿಲ್ ಕೆ.ಕೆ. ಮಾದಲಾದವರು ಶುಭಾಶಂಸನೆಗೈದರು. ಸಂಸ್ಕೃತ ಕ್ಲಬ್ಬ್ ಅಧ್ಯಕ್ಷರಾದ ರಾಜು ಸ್ವಾಗತಿಸಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕಿ ವಂದನಾ ವಂದಿಸಿದಳು. ಗೀತಾ ಟೀಚರ್ ನಿರೂಪಿಸಿದರು. ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಕ್ಕಳಿಂದ ಓದಿನ ಟಿಪ್ಪಣಿ ಮಂಡನೆ, ಗಟ್ಟಿ ಓದಿನ ಮಂಡನೆ, ಅಭಿನಯ ಗೀತೆ, ಕಥೆ ಮಂಡನೆ, ಜಾನಪದ ಗೀತೆ ಗಾಯನ ಮತ್ತು ವಿವಧ ವಿನೋದಾವಳಿಗಳು ನಡೆದವು. ಶತಪೂರ್ತಿ ಸಂಭ್ರಮದಲ್ಲಿರುವ ನಾಡೋಜ ಡಾ/ ಕವಿ ಕಯ್ಯಾರ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು.


No comments:

Post a Comment