ಸೂರಂಬೈಲು
ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ.
ಜಿ.ಎಚ್.ಎಸ್.
ಸೂರಂಬೈಲು
ಶಾಲೆಯ ಸ್ವಾತಂತ್ರ್ಯೋತ್ಸವ
ಸಮಾರಂಭದಲ್ಲಿ ಪುತ್ತಿಗೆ ಗ್ರಾಮ
ಪಂಚಾಯತಿನ ಶಿಕ್ಷಣ ಸ್ಥಾಯಿ ಸಮಿತಿ
ಅಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್
ಧ್ವಜಾರೋಹಣ ಮಾಡಿದರು.
ಉದ್ಘಾಟನಾ
ಸಮಾರಂಭದ ಅಧ್ಯಕ್ಷತೆಯನ್ನು
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ
ದಯಾನಂದ ಪೆರ್ಣೆ ವಹಿಸಿದ್ದರು.ಪ್ರೌಢ
ಶಾಲೆಯ ಮುಖ್ಯ ಶಿಕ್ಷಕರಾದ
ಕೆ.ವಿ.ಸತ್ಯನಾರಾಯಣ
ರಾವ್,
ಸುಜಾತಾ
ಪೆರ್ಣೆ,ಹಮೀದ್
ಸೀತಾಂಗೋಳಿ,ಗೋಪಾಲಕೃಷ್ಣ ಪೆರ್ಣೆ, ಸುಬ್ರಹ್ಮಣ್ಯ
ಭಟ್ ಮತ್ತು ಗೀತಾ ಶುಭಾಶಂಸನೆಗೈದರು.ಮುಖ್ಯ
ಶಿಕ್ಷಕರಾದ ಗಿರಿಜಾನಾಥ ಕೆ
ಸ್ವಾಗತಿಸಿ ಶಶಿಕಲಾ
ಸಿ.ಎಚ್.
ವಂದಿಸಿದರು.
ರಾಜೇಶ್
ನಿರೂಪಿಸಿದರು.ಉದ್ಘಾಟನಾ
ಸಮಾರಂಭದ ಬಳಿಕ ಮಕ್ಕಳಿಂದ ದೇಶಭಕ್ತಿ
ಗಾಯನ,
ನೃತ್ಯ
ಮೊದಲಾದ
ಸಾಂಸ್ಕೃತಿಕ ಕಾರ್ಯಕ್ರಮಗಳು
ನಡೆದವು.