28 Jul 2015


28-07-2015
 ಕಲಾಂ ಅವರಿಗೆ ಭಾವಪೂರ್ಣ ನಮನ.

ಸೂರಂಬೈಲುಃ ಜು.28, ಭಾರತ ರತ್ನ ಡಾ/.ಪಿ.ಜೆ.ಅಬ್ದುಲ್ ಕಲಾಂ ನಮ್ಮನ್ನಗಲಿದರೂ ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯವಾಗಿದೆ. ಹಿರಿಯರಿಗೆ ಹಿರಿಯಣ್ಣನಾಗಿ ಕಿರಿಯರಿಗೆ ಚಿಣ್ಣನಾಗಿ , ಕಲಿಯುವ ವಿದ್ಯಾರ್ಥಿಗಳಿಗೆ ಪ್ರಬುದ್ಧ ಗುರುವಾಗಿ ಎಲ್ಲರಿಗೂ ನೆರವಾಗುವ ಅವರ ಗುಣ ಇಂದಿನ ಜನತೆಯಲ್ಲಿ ಸ್ಥಿರಸ್ಥಾಯಿಯಾಗಲಿ, ಶ್ರೀಯುತರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಮತ್ತು ಅವರ ಆದರ್ಶಗಳನ್ನು ಅನುಸರಿಸುವ ಸಾಮರ್ಥ್ಯವನ್ನು ದೇವರು ಅನುಗ್ರಹಿಸಲಿ ಎ೦ದು ಸೂರಂಬೈಲು ಶಾಲೆಯಲ್ಲಿ ಪ್ರಾರ್ಥಿಸಲಾಯಿತು. ಶೋಕ ಸಂದೇಶ ಸಭೆಯನ್ನು ಉದ್ದೇಶಿಸಿ ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಮತ್ತು ರಾಜು ಕೆ ಮಾತನಾಡಿದರು. ಬಳಿಕ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ ಶಾಲಾಮಟ್ಟದ ಚಿತ್ರರಚನಾ ಶಿಬಿರದ ಉದ್ಘಾಟನೆ ನಡೆಯಿತು. ಶಶಿಕಲಾ ಸಿ.ಎಚ್, ಪಾರ್ವತಿ ಕೆ, ರತೀಶ್, ಶಕುಂತಲಾ ಕೆ, ಕಿರಣ್ ಕೆ ಉಪಸ್ಥಿತರಿದ್ದರು.ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಸಂಚಾಲಕರಾದ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿ ಬಿನು ಕೆ ವಂದಿಸಿದರು. ನಿವೃತ್ತ ಚಿತ್ರಕಲಾ ಶಿಕ್ಷಕರಾದ ಎಸ್.ಬಿ.ಕೋಳಾರಿ, ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

27 Jul 2015


Using the letters in the word “Disappointment” ,form all possible words.
Disappointment
And,Ant,An,Appointment,As,DoDon't,Did,Done,Date,End,Eat,Is,In, It,Man,Me,Mat,Mad,Men
Maintain,Moon,Meant,Map,Met
Net,Nine,Name,No,Not,Nest,Noon,On,One,Ointment,Point,Pot
Pen,Pet,Pin,Pit,Pond,Pant,Paint
Pass,Sat,Sit,Son,Side,Said,Seat
Seen,Stand,Stood,See,Soon,Seed
Top,Tip,To,Ten,Tin,Tent,Time,
Tit,Tat,Tape,Tap

25 Jul 2015

മച്ചിങ്ങ കൊണ്ടുള്ള കളിപ്പാട്ടങ്ങൾ.അനന്യ ആനന്ദ്.രണ്ടാം തരം ബി.ജി.എസ്.ബി.എസ്.സൂരംബയൽ.



15-07-2015
ಸಮವಸ್ತ್ರ ವಿತರಣೆ.
ಸೂರಂಬೈಲುಃ ಜು.25, ಶಾಲೆಯ ಚಟುವಟಿಕೆಗಳು ಮಕ್ಕಳಿಗೆ ಫಲಪ್ರದವಾಗಿ ಸಿಗಬೇಕಾದರೆ ಹೆತ್ತವರ ಸಹಕಾರ ಅತೀ ಅಗತ್ಯವಾಗಿದೆ.ಇಂದಿನ ಕಲಿಕಾ ಪದ್ಧತಿಯಲ್ಲಿ ಮಕ್ಕಳಿಗೆ ಅನುಭವವೇ ಶಿಕ್ಷಣವಾಗಿದೆ. ಇಂತಹ ಕಲಿಕೆ ಅನುಭವವನ್ನು ನೀಡುವಲ್ಲಿ ಶಾಲೆಯು ಸಫಲವಾಗಬೇಕಾದರೆ ರಕ್ಷಕರು ಶಾಲೆಯ ಚಟುವಟಿಕೆಗಳಿಗೆ ಪೂರಕವಾದ ವಿಚಾರಗಳನ್ನು ಒದಗಿಸಲು ಮಂದಾಗಬೇಕು. ಇದಕ್ಕಾಗಿ ತರಗತಿ ರಕ್ಷಕರ ಸಭೆಯು ಅನಿವಾರ್ಯವಾಗಿದೆ. ಘಟಕ ಮೌಲ್ಯಮಾಪನ, ನಿರಂತರ ಮೌಲ್ಯನಿರ್ಣಯಗಳಿಗೆ ಪೂರಕ ಮಾಹಿತಿ ಕಲೆಹಾಕಲು ಅನಿವಾರ್ಯವಾಗಿರುವ ಇಂತಹ ಸಭೆಗಳಲ್ಲಿ ರಕ್ಷಕರು ಭಾಗವಹಿಸಬೇಕು ಎ೦ದು ಪುತ್ತಿಗೆ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ ಜಿ.ಕೆ.ನಾಯಕ್ ನುಡಿದರು. ಅವರು ಸೂರಂಬೈಲು ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನೀಡುವ ಸಮವಸ್ತ್ರ ವಿತರಣೆ ಮತ್ತು ತರಗತಿ ರಕ್ಷಕರ ಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡುತ್ತಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು. ಎ೦.ಪಿ.ಟಿ.. ಅಧ್ಯಕ್ಷೆ ಸುಜಾತ ಪೆರ್ಣೆ, ದಯಾನಂದ ಪೆರ್ಣೆ, ರಮೇಶ ಮುಖಾರಿಕಂಡ,ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ವಿ.ಸತ್ಯನಾರಾಯಣ ರಾವ್ ಕಿರಣ್ ಉಪಸ್ಥಿತರಿದ್ದರು. ಮನೋಜ್ ವಿ ಮತ್ತು ಸುಬ್ರಹ್ಮಣ್ಯ ಭಟ್ ಕೆ ತರಗತಿ ಪಿ.ಟಿ..ಯ ಕುರಿತು ಆಶಯ ಭಾಷಣ ಮಾಡಿದರು.ಮುಖ್ಯ ಶಿಕ್ಷಕರಾದ ಗಿರಿಜಾನಾಥ ಕೆ ಸ್ವಾಗತಿಸಿ, ಸ್ಟಾಫ್ ಸೆಕ್ರಟರಿ ಶಶಿಕಲಾ ಸಿ.ಎಚ್. ವಂದಿಸಿದರು.ನಂತರ ಪ್ರತಿ ತರಗತಿಗಳಲ್ಲಿ ರಕ್ಷಕರ ಸಭೆ ನಡೆಯಿತು. ಅಧ್ಯಕ್ಷರ ಸಹಿತ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.



7 Jul 2015

07-07-2015
ಕಾವೇರಿಕಾನ ತೋಟದಲ್ಲಿ ಸೂರಂಬೈಲು ಶಾಲೆಯ ಮಕ್ಕಳು.
 
ನಮ್ಮ ದೇಶವು ಕೃಷಿ ಪ್ರಧಾನವಾದ ದೇಶವಾಗಿದೆ. ಕೃಷಿ ಮಾಡುವುದರಿಂದ ಕೈಗಾರಿಕೆಗಳಿಗೆ ಬೇಕಾದ ಕಚ್ಛಾವಸ್ತುಗಳು ಸಿಗುತ್ತವೆ. ಕೃಷಿ ಸಮೃದ್ಧವಾಗಬೇಕಾದರೆ ಆಸಕ್ತಿ ಮುಖ್ಯವಾಗಿದೆ. ಹೊಸ ಹೊಸ ಕೃಷಿತಂತ್ರಜ್ಞಾನಗಳನ್ನು ಕರಗತಮಾಡುವ ಗುಣವಿರುವ ಕೃಷಿಕರಿಗೆ ಕೃಷಿ ಯಾವತ್ತೂ ಹೊರೆಯಾಗದು. ಉತ್ತಮ ಬೀಜಗಳ ಆಯ್ಕೆ, ಸಸ್ಯಗಳ ಪೋಷಣೆ ಮತ್ತು ನಿರ್ವಹಣೆ ಕೃಷಿಯ ಪ್ರಮುಖವಾದ ವಿಚಾರಗಳಾಗಿವೆ. ಇವು ಮೂರು ಒಂದಕ್ಕೊಂದು ಪೂರಕವೆನಿಸಿದಾಗ ಕೃಷಿ ಕೆಲಸ ಹಗುರವೆನಿಸುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಕಸಿಕಟ್ಟುವಿಕೆ ಆಗಿದೆ. ಕಸಿಕಟ್ಟಿ ಹೊಸ ಸಸ್ಯ ಮಾಡುವುದರಿಂದ ಬೇಗನೆ ಬೆಳವಣಿಗೆ ಉಂಟಾಗುತ್ತದೆ, ಉತ್ತಮ ತಳಿಯ ಗಿಡಗಳನ್ನು ತಯಾರಿಸಬಹುದಾಗಿದೆ.ಬೇಗನೆ ಫಸಲು ಕೈಸೇರುವುದು. ಕಸಿಕಟ್ಟುವ ವಿಜ್ಞಾನ ಕೃಷಿಲೋಕದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಎ೦ದು ಕಾವೇರಿಕಾನ ಶಂಕರ ಭಟ್ ನುಡಿದರು. ಅವರು ಸೂರಂಬೈಲು ಶಾಲೆಯ ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ತಿಳುವಳಿಕಾ ತರಗತಿ ನಡೆಸಿ ಕಸಿಕಟ್ಟುವ ಪ್ರಾತ್ಯಕ್ಷಿಕೆಯನ್ನು ಮಾಡಿದರು. ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳ ಅನೇಕ ಸಂಶಯಗಳನ್ನು ನಿವಾರಿಸಿದ್ದಲ್ಲದೆ ಕೃಷಿಯ ಕುರಿತಾದ ಅನೇಕ ಮಾಹಿತಿಗಳನ್ನು ನೀಡಿದರು. ಕೆಲವು ಸಸ್ಯಗಳನ್ನು ಮಕ್ಕಳಿಗೆ ನೀಡಿ ಅವುಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿದರು. ಉಪಾಹಾರ ವಿತರಣೆಯ ಬಳಿಕ ಮಕ್ಕಳ ಪ್ರತಿನಿಧಿಯಾಗಿ ಯಕ್ಷಿತಾ ಧನ್ಯವಾದ ನೀಡಿದಳು. ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಮತ್ತು ಶಶಿಕಲಾ ಸಿ.ಎಚ್ ನೇತೃತ್ವ ನೀಡಿದರು.