|
I LOVE MY INDIA
|
|
Smt:HARINI GK NAIK Welfare Standing Committee
|
|
PTA PRESIDENT GOPALAKRISHNA.M |
ಸ್ವಾತಂತ್ರ್ಯೋತ್ಸವ 2014 .ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕಹಳೆಯಾಗಲಿ.- ಹರಿಣಿ ಜಿ.ಕೆ.ನಾಯಕ್.
ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಮನೆಯಿಂದಲೇ ದೇಶಪ್ರೇಮದ ಕುರಿತು ಪಾಠ ಲಭಿಸುವಂತಾಗಬೇಕು .ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಮಕ್ಕಳಲ್ಲಿ ದೇಶಪ್ರೇಮದ ಮೈಲಿಗಲ್ಲಾಗಲಿ. ಎಂದು ಪುತ್ತಿಗೆ ಗ್ರಾಮ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಿ ಜಿ.ಕೆ.ನಾಯಕ್ ಹೇಳಿದರು. ಅವರು ಸೂರಂಬೈಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಈ ಅಭಿಪ್ರಾಯಪಟ್ಟರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪೆರ್ಣೆ ವಹಿಸಿದ್ದರು. ಮಾತೃ ಸಂಘದ ಅಧ್ಯಕ್ಷೆ ಸುಜಾತಾ ಪೆರ್ಣೆ, ಉಪಾಧ್ಯಕ್ಷರಾದ ದಯಾನಂದ ಪೆರ್ಣೆ, ಪ್ರೌಢ ಸಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ರಾವ್ ಕೆ.ವಿ., ಸ್ಟಾಫ್ ಸೆಕ್ರೆಟರಿ ಕಿರಣ್, ಪಾರ್ವತಿ ಮೊದಲಾದವರು ಶುಭಾಶಂಸನೆಂಗೈದರು. ಮುಖ್ಯ ಶಿಕ್ಷಕ ಗಿರಿಜಾನಾಥ ಕೆ. ಸ್ವಾಗತಿಸಿ ಲೀನಾ ವಂದಿಸಿದರು. ಮನೋಜ್ ವೆಳ್ಳಯಿಲ್ ಮತ್ತು ರಾಜು ನಿರ್ವಹಣೆ ಮಾಡಿದರು.ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ವಂದೇಮಾತರಂ ರೂಪಕ, ಮತ್ತು ಮಕ್ಕಳಿಂದ ವಿವಿಧ ವಿನೋದಾವಳಿ ಜರಗಿತು.ಸಿಹಿತಿಂಡಿ ವಿತರಣೆ ನಡೆಯಿತು.
No comments:
Post a Comment