13-11-2014
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಾಹಿತ್ಯ ಸಂಚಿಕೆಯ ಸ್ಪರ್ಧೆಯಲ್ಲಿ ಸೂರಂಬೈಲು ಶಾಲೆಗೆ ಬಹುಮಾನ.
ಜ್ಞಾನೋದಯ
ಹಿರಿಯ ಬುನಾದಿ ಶಾಲೆ ಮಾನ್ಯದಲ್ಲಿ
ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ
ಸಾಹಿತ್ಯ ಸಂಚಿಕೆಯ ಸ್ಪರ್ಧೆಯಲ್ಲಿ
ಸೂರಂಬೈಲು ಶಾಲೆ ಸಿದ್ಧಗೊಳಿಸಿದ
ದರ್ಪಣ ಹಸ್ತಪತ್ರಿಕೆಯು ಪ್ರಥಮ
ಸ್ಥಾನ ಗಳಿಸಿತು.
ಮಕ್ಕಳ ಸಾಹಿತ್ಯಾಭಿರುಚಿಯನ್ನು
ಹೆಚ್ಚಿಸಲು ಇಂತಹ ಹಸ್ತಪತ್ರಿಕೆಗಳು
ಸಹಾಯಮಾಡುತ್ತವೆ,
ಮಾಹಿತಿ ತಂತ್ರಜ್ಞಾನ
ಗಳ ಭರಾಟೆಯಲ್ಲಿ ಮಕ್ಕಳ ಓದುಬರಹ
ಕಡಿಮೆಯಾಗುವ ಈ ಸಮಯದಲ್ಲಿ ಇಂತಹ
ವ್ಯವಸ್ಥಿತ ಬರವಣಿಗೆಗಳು ಮಕ್ಕಳಿಗೆ
ಆಶಾ ದೀಪವಾಗಿದೆ ಎ೦ದು ತಮ್ಮ
ಅಭಿನಂದನಾ ಭಾಷಣದಲ್ಲಿ ಮುಖ್ಯಶಿಕ್ಷಕರಾದ
ಗಿರಿಜಾನಾಥ ಕೆ ಅಭಿಪ್ರಾಯಪಟ್ಟರು.
ಪ್ರೌಢ ಶಾಲಾ ಮುಖ್ಯಶಿಕ್ಷಕರಾದ
ಕೆ.ವಿ.ಸತ್ಯನಾರಾಯಣ
ರಾವ್, ಕಿರಣ್
ಕೆ, ಗೀತಾ
ಕೆ, ಶುಭಾಶಂಸನೆಗೈದರು.
ಮಕ್ಕಳು ವಿವಿಧ
ಸಂದರ್ಭಗಳಲ್ಲಿ ರಚಿಸಿದ ಕೃತಿಗಳನ್ನು
ತಿದ್ದಿ ಬರೆಯಲು ಅವಕಾಶ ನೀಡಿದರೆ
ಒಳ್ಳೆಯ ಸಾಹಿತ್ಯಗಳು ಉಂಟಾಗುತ್ತವೆ,
ಆದುದರಿಂದ ಇಂತಹ
ಸಾಹಿತ್ತಿಕ ರಚನೆಗಳ ಸೃಷ್ಚಿಗೆ
ಅನುವುಮಾಡಿ ಅವುಗಳನ್ನು
ಕ್ರೋಢೀಕರಿಸಬೇಕೆಂದು ಸಂಚಾಲಕರಾದ
ಸುಬ್ರಹ್ಮಣ್ಯ ಭಟ್ ಕೆ ಸೂಚಿಸಿದರು.ಹಸ್ತ
ಪತ್ರಿಕೆಯ ಪ್ರಧಾನ ಸಂಪಾದಕ
ಪ್ರದೀಪ್ ಕೆ ಸ್ವಾಗತಿಸಿ,
ಧನ್ಯಶ್ರೀ ವಂದಿಸಿದಳು.ಸಾಹಿತ್ಯ ರಸಪ್ರಶ್ನೆಯಲ್ಲಿ ತೃತೀಯ ಬಹುಮಾನ ಗಳಿಸಿದ ವಂದನಾ ಮತ್ತು ಚೈತ್ರಾ ತಂಡಕ್ಕೆ ಅಭಿನಂದನೆಗೈಯಲಾಯಿತು.
ದರ್ಪಣ ಹಸ್ತ ಪತ್ರಿಕೆಯ ಪ್ರಧಾನ ಸಂಪಾದಕಃ ಪ್ರದೀಪ್ ಕೆ.
ಸಂಪಾದಕ ಮಂಡಳಿ ಸದಸ್ಯರುಃ
ಚಿತ್ರ ಎಂ, ಧನ್ಯ,ಕಮರುಬಾನ್,ಕೃಷ್ಣಪ್ರಸಾದ, ಮನೋಜ್ ಪಿ.ಜಿ, ಲಾವಣ್ಯ ಮತ್ತು ಸುಶ್ಮಿತಾ.
ದರ್ಪಣ ಹಸ್ತ ಪತ್ರಿಕೆಯ ಪ್ರಧಾನ ಸಂಪಾದಕಃ ಪ್ರದೀಪ್ ಕೆ.
ಸಂಪಾದಕ ಮಂಡಳಿ ಸದಸ್ಯರುಃ
ಚಿತ್ರ ಎಂ, ಧನ್ಯ,ಕಮರುಬಾನ್,ಕೃಷ್ಣಪ್ರಸಾದ, ಮನೋಜ್ ಪಿ.ಜಿ, ಲಾವಣ್ಯ ಮತ್ತು ಸುಶ್ಮಿತಾ.
No comments:
Post a Comment